ಪ್ರೀತಿಸುವುದು ಒಂದು ಕಲೆ, ಕಲಿತು-ರೂಢಿಸಿ ಬರುವ ಭಾವನೆ ಇದಲ್ಲ. ಪ್ರೀತಿಯ ಅಮರ ಪ್ರತೀಕ ರಾಧಾ-ಕೃಷ್ಣ , ಮಾನವ ಸ್ವರೂಪದಲ್ಲಿ ಜನಿಸಿ ಪ್ರೀತಿಯ ಗಾಢತೆ ಹಾಗು ಮೌಲ್ಯವನ್ನು ತೋರಿದವರು ಇವರು .ರಾಧಾ-ಕೃಷ್ಣರ ಪ್ರೀತಿಯ ಒಂದಂಶದಷ್ಟು ಪ್ರೀತಿ ನಮ್ಮಲ್ಲಿ ಮೂಡಿದರೆ, ಅಂತಹ ಪ್ರೀತಿ ದೊರೆತರೆ , ಜೀವನವೇ ಭಾಗ್ಯದಾಯಕ ,ಸುಖಮಯ
ರಾಧೆಗೆ ಜಗತ್ತೇ ಕೃಷ್ಣಮಯವು
ಸ್ನೇಹದಿಂದ ಮೂಡಿದ ಅನುರಕ್ತಿ
ಅನುರಕ್ತಿಯಿಂದ ಅರಳಿದ ಭಕ್ತಿ
ಆಕೆಗೆ ಅವನದೇ ಮೋಹಮಾಯೆಯು
ಮನದಲಿ ಆವರಿಸಿದ ಗೋಪಾಲನು ,
ಆಕೆಯ ಕಂಗಳಲಿ ಅವತರಿಸುವನು
ನಾಟ್ಯ-ಗಾನ ಲೋಲ ಕೃಷ್ಣನಲಿ ಲೀನವು
ಆಕೆಯ ಪ್ರತಿ ಎದೆ ಬಡಿತವು
" ನನ್ನಲ್ಲಿ ಕೃಷ್ಣ ", " ನಾನೇ ಕೃಷ್ಣ "
ರಾಧೆಗೆ ಕೃಷ್ಣನೇ ಸರ್ವಸ್ವವು
ಇವಳೇ ಪ್ರೀತಿಯ ಸ್ವರೂಪವು
ಅವಿರತ, ನಿರಂತರ ಕಾಯುವಿಕೆಯಲಿ ಇರುವವಳೇ ರಾಧೆಯು
ಅನಂತ ಪ್ರೀತಿಯ ನೀಯುವವಳೇ ರಾಧೆಯು
ಸಾಮಿಪ್ಯ-ಸಾನಿಧ್ಯಗಳ ಎಲ್ಲೆ ಮೀರಿ ,
ಆಸೆ ನಿರಾಸೆಗಳ ಬಯಕೆ ದಾಟಿದವಳೇ ರಾಧೆಯು
ಮಾಧವನ ಕೊಳಲ ಮಧುರ ದನಿಯಲಿ ಇಹಳು ರಾಧೆ
ಶ್ಯಾಮನ ಕಣ್ಮಣಿ , ಸಹಚಾರಿಣಿ , ಸಖಿಯೇ ರಾಧೆ
ಶ್ಯಾಮನ ಆಸರೆ, ಪ್ರತಿಬಿಂಬವೇ ರಾಧೆ
ಪ್ರೀತಿಯ ಅನನ್ಯ -ದಿವ್ಯ ಪ್ರತೀಕವೇ ರಾಧೆ
ರಾಧೆಗೆ ಜಗತ್ತೇ ಕೃಷ್ಣಮಯವು
ಸ್ನೇಹದಿಂದ ಮೂಡಿದ ಅನುರಕ್ತಿ
ಅನುರಕ್ತಿಯಿಂದ ಅರಳಿದ ಭಕ್ತಿ
ಆಕೆಗೆ ಅವನದೇ ಮೋಹಮಾಯೆಯು
ಮನದಲಿ ಆವರಿಸಿದ ಗೋಪಾಲನು ,
ಆಕೆಯ ಕಂಗಳಲಿ ಅವತರಿಸುವನು
ನಾಟ್ಯ-ಗಾನ ಲೋಲ ಕೃಷ್ಣನಲಿ ಲೀನವು
ಆಕೆಯ ಪ್ರತಿ ಎದೆ ಬಡಿತವು
" ನನ್ನಲ್ಲಿ ಕೃಷ್ಣ ", " ನಾನೇ ಕೃಷ್ಣ "
ರಾಧೆಗೆ ಕೃಷ್ಣನೇ ಸರ್ವಸ್ವವು
ಇವಳೇ ಪ್ರೀತಿಯ ಸ್ವರೂಪವು
ಅವಿರತ, ನಿರಂತರ ಕಾಯುವಿಕೆಯಲಿ ಇರುವವಳೇ ರಾಧೆಯು
ಅನಂತ ಪ್ರೀತಿಯ ನೀಯುವವಳೇ ರಾಧೆಯು
ಸಾಮಿಪ್ಯ-ಸಾನಿಧ್ಯಗಳ ಎಲ್ಲೆ ಮೀರಿ ,
ಆಸೆ ನಿರಾಸೆಗಳ ಬಯಕೆ ದಾಟಿದವಳೇ ರಾಧೆಯು
ಮಾಧವನ ಕೊಳಲ ಮಧುರ ದನಿಯಲಿ ಇಹಳು ರಾಧೆ
ಶ್ಯಾಮನ ಕಣ್ಮಣಿ , ಸಹಚಾರಿಣಿ , ಸಖಿಯೇ ರಾಧೆ
ಶ್ಯಾಮನ ಆಸರೆ, ಪ್ರತಿಬಿಂಬವೇ ರಾಧೆ
ಪ್ರೀತಿಯ ಅನನ್ಯ -ದಿವ್ಯ ಪ್ರತೀಕವೇ ರಾಧೆ
-ಪ್ರಜ್ಞಮಾಲಾ
0 comments:
Post a Comment