Thursday 23 November, 2017

ಪ್ರೀತಿಸುವುದು ಒಂದು ಕಲೆ, ಕಲಿತು-ರೂಢಿಸಿ ಬರುವ ಭಾವನೆ ಇದಲ್ಲ. ಪ್ರೀತಿಯ ಅಮರ ಪ್ರತೀಕ ರಾಧಾ-ಕೃಷ್ಣ , ಮಾನವ ಸ್ವರೂಪದಲ್ಲಿ ಜನಿಸಿ ಪ್ರೀತಿಯ ಗಾಢತೆ ಹಾಗು ಮೌಲ್ಯವನ್ನು ತೋರಿದವರು ಇವರು .ರಾಧಾ-ಕೃಷ್ಣರ ಪ್ರೀತಿಯ ಒಂದಂಶದಷ್ಟು ಪ್ರೀತಿ ನಮ್ಮಲ್ಲಿ ಮೂಡಿದರೆ, ಅಂತಹ ಪ್ರೀತಿ ದೊರೆತರೆ , ಜೀವನವೇ ಭಾಗ್ಯದಾಯಕ ,ಸುಖಮಯ

ಪ್ರೀತಿಸುವುದು ಒಂದು ಕಲೆ, ಕಲಿತು-ರೂಢಿಸಿ ಬರುವ ಭಾವನೆ ಇದಲ್ಲ. ಪ್ರೀತಿಯ ಅಮರ ಪ್ರತೀಕ ರಾಧಾ-ಕೃಷ್ಣ , ಮಾನವ ಸ್ವರೂಪದಲ್ಲಿ ಜನಿಸಿ ಪ್ರೀತಿಯ ಗಾಢತೆ ಹಾಗು ಮೌಲ್ಯವನ್ನು ತೋರಿದವರು  ಇವರು .ರಾಧಾ-ಕೃಷ್ಣರ ಪ್ರೀತಿಯ ಒಂದಂಶದಷ್ಟು ಪ್ರೀತಿ ನಮ್ಮಲ್ಲಿ ಮೂಡಿದರೆ, ಅಂತಹ ಪ್ರೀತಿ ದೊರೆತರೆ , ಜೀವನವೇ  ಭಾಗ್ಯದಾಯಕ  ,ಸುಖಮಯ

ರಾಧೆಗೆ ಜಗತ್ತೇ ಕೃಷ್ಣಮಯವು 
ಸ್ನೇಹದಿಂದ ಮೂಡಿದ ಅನುರಕ್ತಿ
ಅನುರಕ್ತಿಯಿಂದ ಅರಳಿದ ಭಕ್ತಿ 
ಆಕೆಗೆ ಅವನದೇ ಮೋಹಮಾಯೆಯು 

ಮನದಲಿ ಆವರಿಸಿದ ಗೋಪಾಲನು ,
ಆಕೆಯ ಕಂಗಳಲಿ ಅವತರಿಸುವನು 
ನಾಟ್ಯ-ಗಾನ ಲೋಲ ಕೃಷ್ಣನಲಿ ಲೀನವು 
ಆಕೆಯ ಪ್ರತಿ ಎದೆ ಬಡಿತವು 
" ನನ್ನಲ್ಲಿ ಕೃಷ್ಣ ", " ನಾನೇ ಕೃಷ್ಣ " 
ರಾಧೆಗೆ ಕೃಷ್ಣನೇ ಸರ್ವಸ್ವವು  
ಇವಳೇ ಪ್ರೀತಿಯ ಸ್ವರೂಪವು 

ಅವಿರತ, ನಿರಂತರ  ಕಾಯುವಿಕೆಯಲಿ ಇರುವವಳೇ  ರಾಧೆಯು 
ಅನಂತ ಪ್ರೀತಿಯ ನೀಯುವವಳೇ ರಾಧೆಯು 
ಸಾಮಿಪ್ಯ-ಸಾನಿಧ್ಯಗಳ ಎಲ್ಲೆ  ಮೀರಿ ,
ಆಸೆ ನಿರಾಸೆಗಳ ಬಯಕೆ ದಾಟಿದವಳೇ ರಾಧೆಯು 

ಮಾಧವನ  ಕೊಳಲ ಮಧುರ ದನಿಯಲಿ  ಇಹಳು ರಾಧೆ 
ಶ್ಯಾಮನ ಕಣ್ಮಣಿ , ಸಹಚಾರಿಣಿ , ಸಖಿಯೇ ರಾಧೆ 

ಶ್ಯಾಮನ ಆಸರೆ,  ಪ್ರತಿಬಿಂಬವೇ ರಾಧೆ 
ಪ್ರೀತಿಯ ಅನನ್ಯ -ದಿವ್ಯ ಪ್ರತೀಕವೇ ರಾಧೆ 
-ಪ್ರಜ್ಞಮಾಲಾ 

0 comments:

Post a Comment