ನನ್ನ ಅಜ್ಜ
ಬಹಳ ವರುಷಗಳ ಹಿಂದೆ , ಎಂದೋ ಬರೆದ ಈ ಕವನದ ಸಾಲುಗಳು . . . ಇಂದು ಕೈಸೇರಿದಾಗ ಮನದ ಅಂಗಳದಲಿ ಖುಷಿಯ ಕುಸುಮ ಅರಳಿಸಿತು
ಮಮತೆಯ ಮಡಿಲಲಿ ಆಡಿಸಿ ನನ್ನ
ಪ್ರೀತಿಯ ತುತ್ತನು ಉಣಿಸಿದರು
ಮಲಗಲು ಮಡಿಲನು, ನಡೆಯಲು ಕೈಯನ್ನು ,
ಒಲವಿನ ಗೂಡಲಿ ಬೆಳೆಸಿದರು
ಹಠವನು ಮಾಡಲು ಬುದ್ಧಿಯ ತಿಳಿಸಿ
ಗಣಿತ- ಕನ್ನಡಗಳ ಕಲಿಸಿದರು
ಅಂಗಳದಲ್ಲಿನ ಆ ಜೂಟ್-ಆಟ , ಗದ್ದೆಯ ಬಯಲಿನ ಆ ಸುತ್ತಾಟ
ಸಮುದ್ರ ದಡದಲಿನ ಆ ಹುಚ್ಚಾಟ
ಬಾಲ್ಯಕೆ ಸೊಗಸಿನ ಅನುಭಗಳ ತುಂಬಿದರು
ಅಂಗಳದಲ್ಲಿನ ಆ ಜೂಟ್-ಆಟ , ಗದ್ದೆಯ ಬಯಲಿನ ಆ ಸುತ್ತಾಟ
ಸಮುದ್ರ ದಡದಲಿನ ಆ ಹುಚ್ಚಾಟ
ಬಾಲ್ಯಕೆ ಸೊಗಸಿನ ಅನುಭಗಳ ತುಂಬಿದರು
ಶಿಸ್ತಿನ ಗುರುವಾಗಿ , ಗದರುತಾ -ತಿದ್ದುತಾ
ಗೆಲುವನು ಸಾಧಿಸೆ ಅಕ್ಕರೆಯಿಂದಲಿ
ಒಲವಿನ ಅಪ್ಪುಗೆ ನೀಡಿದರು
ಯಾರಿವರು ? ಯಾರಿವರು ?
ಇವರೇ ನನ್ನಜ್ಜ ನೀಲಕಂಠ ಮಾಸ್ತರರು
-ಪ್ರಜ್ಞಮಾಲಾ