Tuesday, 12 July 2011

"ಕಳವಳ " : ನಮ್ಮ ಬದುಕಿನ ಹಲವಾರು ಕನಸುಗಳು ಸಾಕಾರಗೊಳ್ಳಲು ಇಂದಿನ ನಮ್ಮ ನಿರ್ಧಾರಗಳೇ ಬುನಾದಿ... ನಮ್ಮ ಯೋಚನಾಲಹರಿ, ದೂರಾಲೋಚನೆ , ಅವಲೋಕನಾಶಕ್ತಿಗಳು ನಮ್ಮ ಪ್ರಜ್ಞೆಗೆ ಕಾರಣವಾದರೆ, "ಭಾಗ್ಯ" ನಮ್ಮ ಹಣೆಬರಹದ,ಮನ್ವಂತರದ ಕರ್ತಾರ , ಭಾಗ್ಯ ಹಾಗು ಶ್ರಮ ಜೊತೆಗೂಡಿದಾಗ , ಬಾಳಿನ ಸುಂದರ ಕ್ಷಣಗಳ ಅಥವಾ ಘೋರ ದುರಂತಗಳ ... ಒಟ್ಟಾರೆ "ವಾಸ್ತವ"ದ ರೂಪಾಂತರ ಸಾಧ್ಯ .

ಮನದಲಿ ಮೂಡುತಿಹುದು ಕನಸುಗಳು ನೂರಾರು-ಹಲವಾರು
ಚಿತ್ತದಲಿ ತುಂಬಿಹುದು ಗೊಂದಲ -ದ್ವಂದ್ವಗಳು ಸಾವಿರಾರು
ಮುಂಬರುವ ಕೆಲವು ಕ್ಷಣಗಳು
ನಿರ್ಧರಿಸುವವು ಬಾಳಿನ ಹಲವು ಕ್ಷಣಗಳನು

ದಾಸಿಯಾಗುವೆನೋ  ವ್ಯಾಮೋಹದ , ದಾಹ-ದುರಾಸೆಗಳ ಸಂಕೋಲೆಗೆ . . .?
ಅಥವಾ
ಅರಸಿಯಾಗುವೆನೋ  ಪರಿಶ್ರಮದ ಭದ್ರ ಬುನಾದಿಯ ಮಹಲಿಗೆ  . . . ?

"ಭಾಗ್ಯ"ವೇ ಕರ್ತಾರ ಕವಲೊಡೆಯಲು,
ಜೀವಾಳದ ಪ್ರಶ್ನೆಗಳ ಉತ್ತರ ಪಡೆಯಲು ,
ಅಂಧಕಾರದ ನಿಪಾತಕೆ ದೂಡಲು. . .
ಅಥವಾ
       ಬೆಳಕಿನ ಪಥದಲಿ ನಡೆಸಲು   . . .
                                                       -ಪ್ರಜ್ಞಮಾಲಾ

0 comments:

Post a Comment