ಮನದಲಿ ಮೂಡುತಿಹುದು ಕನಸುಗಳು ನೂರಾರು-ಹಲವಾರು
ಚಿತ್ತದಲಿ ತುಂಬಿಹುದು ಗೊಂದಲ -ದ್ವಂದ್ವಗಳು ಸಾವಿರಾರು
ಮುಂಬರುವ ಕೆಲವು ಕ್ಷಣಗಳು
ನಿರ್ಧರಿಸುವವು ಬಾಳಿನ ಹಲವು ಕ್ಷಣಗಳನು
ದಾಸಿಯಾಗುವೆನೋ ವ್ಯಾಮೋಹದ , ದಾಹ-ದುರಾಸೆಗಳ ಸಂಕೋಲೆಗೆ . . .?
ಚಿತ್ತದಲಿ ತುಂಬಿಹುದು ಗೊಂದಲ -ದ್ವಂದ್ವಗಳು ಸಾವಿರಾರು
ಮುಂಬರುವ ಕೆಲವು ಕ್ಷಣಗಳು
ನಿರ್ಧರಿಸುವವು ಬಾಳಿನ ಹಲವು ಕ್ಷಣಗಳನು
ದಾಸಿಯಾಗುವೆನೋ ವ್ಯಾಮೋಹದ , ದಾಹ-ದುರಾಸೆಗಳ ಸಂಕೋಲೆಗೆ . . .?
ಅಥವಾ
ಅರಸಿಯಾಗುವೆನೋ ಪರಿಶ್ರಮದ ಭದ್ರ ಬುನಾದಿಯ ಮಹಲಿಗೆ . . . ?
ಅರಸಿಯಾಗುವೆನೋ ಪರಿಶ್ರಮದ ಭದ್ರ ಬುನಾದಿಯ ಮಹಲಿಗೆ . . . ?
"ಭಾಗ್ಯ"ವೇ ಕರ್ತಾರ ಕವಲೊಡೆಯಲು,
ಜೀವಾಳದ ಪ್ರಶ್ನೆಗಳ ಉತ್ತರ ಪಡೆಯಲು ,
ಅಂಧಕಾರದ ನಿಪಾತಕೆ ದೂಡಲು. . .
ಜೀವಾಳದ ಪ್ರಶ್ನೆಗಳ ಉತ್ತರ ಪಡೆಯಲು ,
ಅಂಧಕಾರದ ನಿಪಾತಕೆ ದೂಡಲು. . .
ಅಥವಾ
ಬೆಳಕಿನ ಪಥದಲಿ ನಡೆಸಲು . . .
-ಪ್ರಜ್ಞಮಾಲಾ
ಬೆಳಕಿನ ಪಥದಲಿ ನಡೆಸಲು . . .
-ಪ್ರಜ್ಞಮಾಲಾ
0 comments:
Post a Comment