Saturday 17 August, 2013

ತಿರುವು


ತಿರುವು

ಸೋಜಿಗದ ತಿರುವೊಂದು ಬಾಳಿನಲಿ  ಹೊಸ ಅಲೆಯ ತಂದಿತ್ತು ,
ಖುಷಿಯ ಖಾತೆಗೆ  ಹೊಂದಾಣಿಕೆಯ ಬೀಗ ಜಡಿದ್ದಿತ್ತು . . .    

ಒಗ್ಗದೇ ಜಗ್ಗಾಡುತ್ತಿದ್ದೆ ಪ್ರತಿಯೊಂದು ದಿನ   
ಮಾರಿಯಂತೆ ಕಾಡುತ್ತಿತ್ತು ಪ್ರತಿಯೊಂದು ಕ್ಷಣ  

ನನ್ನವರ ಬಿಸಿಅಪ್ಪುಗೆಯು ದೂರವಾಗಿತ್ತು ,
ಸ್ಥೈರ್ಯದ ತಳಹದಿಯೇ ನಲುಗಾಡುತ್ತಿತ್ತು  . . . 

ಮುನಿಸಿಕೊಂಡ  ಭಾಗ್ಯನ ಕೈಗೊಂಬೆಯಾಗಿ ,
ದಿನದೂಡಿದ್ದೆ  ಹೈರಾಣದಲಿ ನಾನು  . . . 
ಕೈಚೆಲ್ಲಿ ಕೂತೆ , ಹೆಜ್ಜೆಯ ಹಿಂದಿಟ್ಟೆ . . . 
ಮರಳಿ ಗೂಡನು ಸೇರಲು ಹವಣಿಸುತ್ತಿದ್ದೆ ಅಂದು  . . . . 

ತೂರಿಬಂದಿತು ಕಿರಣವೊಂದು ನನ್ನ ಕೈಹಿಡಿಯಲು ,
ಮೂಡಿಸಲೆಂದೇ ನವ್ಯ ಹುರುಪ ,ಗುರಿ ಮಟ್ಟಿಸಲು . . . 

ದಾರಿಯೊಂದು ರೂಪುಗೊಂಡಿತು ದಿಕ್ಕೆಟ್ಟ ನಾವೆಗೆ ,

ಚೇತರಿಸಿಕೊಂಡೆ ನನ್ನವರ ಮೃದು ಅರೈಕೆಯಲಿ, 
ಮುನಿದ ಭಾಗ್ಯವೂ ಜೊತೆಯಾಯಿತು ಅಂದಿನಿಂದಲೇ  . . . 

ದಿನಗಳುರುಳಿದವು ಹೇಗೋ ತಿಳಿಯೆನು ನಾನು ,
ಈ ನಂದನವನದಲ್ಲಿ ,
ತುಂಟ ತಮ್ಮನ ಕಲರವವಿತ್ತು ,
ಶಾಂತ ತಂಗಿಯ ಪ್ರೀತಿಯೂ ಇತ್ತು . . . 
ಸ್ನೇಹದ ಮಾತೃ - ಹೃದಯವೂ  ಇತ್ತು ,
ಕಾಳಜಿಯ ಅಣ್ಣನ ನೆರಳಿತ್ತು  . . . 

ತನ್ನ ಬಾಂಧವ್ಯದ  ಬೆಸುಗೆಯಲಿ ,
ನನ್ನೆಲ್ಲಾ ನೋವ ಮರೆಯಾಗಿಸಿತ್ತು  . . . 
ಮನೆ-ಮನದಲ್ಲಿ ಒಲವ ಸಾಗರವೇ ಇತ್ತು . . . 



ಬಾಳ ನವ್ಯ ಸವಾಲೊಂದು ಕರೆಯುತಿದೆ ದೂರ ಈಗ ,
ವಿದಾಯ ಹೇಳಲೇ ಬೇಕು  ಕುಸುಮ ನಿಲಯದಿಂದ ಬಹು ಬೇಗ  ,

ಹೊಸ ತಿರುವಿನ ಅಚ್ಚರಿಗೆ ಕಾಯುತಿದೆ ಮನ 
ಹರುಷಗೊಂಡರೂ , 
ಮುಂದೆ ಸಾಗಲು ಹಿಂಜರಿಯುತಿದೆ ಮನ ,

 ಬಿಟ್ಟು ಬರಲಿ ಹೇಗೆ ,    

ಪ್ರೀತಿಯ  ದಾಹ ಇನ್ನೂ ನೀಗಿಲ್ಲ ,

ಮಾತಿನ ಗಂಟು ಇನ್ನೂ ಬಿಚ್ಚಿಲ್ಲ ,

ನೆನಪಿನ ಬುತ್ತಿಯು ಇನ್ನು ತುಂಬಿಲ್ಲ . . .

ಬಿಟ್ಟು ಬರಲು ಮನಸಿಲ್ಲ . . . 

ಮರಳಿ ಹೋಗಲು ಬಯಸುತಿದೆ ಬಂದ ದಾರಿಯಲಿ ಮತ್ತೆ ಇಂದು

ಕಾಲಚಕ್ರವ ಹಿಂದೆ ತಿರುಗಿಸಲು ಬಯಸುತಿದೆ ಮನವಿಂದು 


-ಪ್ರಜ್ಞಮಾಲಾ

0 comments:

Post a Comment