ಅಂದು ಆ ನೋಟದಲ್ಲಿ ನನ್ನ ಅಸಹಾಯಕತೆ ಕಾಣಲೇ ಇಲ್ಲವೇನು ? ...
ನಿನ್ನ ಪ್ರತಿ ಕಂಬನಿ-ಹುಸಿ ನಗೆಯಲ್ಲೂ ನನ್ನ ಹತಾಶೆ ಕೂಡಿರಲಿಲ್ಲವೇನು!!!
ದ್ವಾರದಲಿ ನೀ ಕಂಡ ಆ ಹುಸಿನೋಟ ....
ನನ್ನ ಮನದಲಿ ಎದ್ದ ಬಿರುಗಾಳಿಯ ತೋರಲಿಲ್ಲವೇನು !!!...
ಸಮಾಜದ ಆ ನಿಲುವಿಗೆ ,
ನನ್ನವರ ನಿಕ್ರಷ್ಟ ನೋಟಕೆ ...
ನಿನ್ನ ಪ್ರತಿ ಕಂಬನಿ-ಹುಸಿ ನಗೆಯಲ್ಲೂ ನನ್ನ ಹತಾಶೆ ಕೂಡಿರಲಿಲ್ಲವೇನು!!!
ದ್ವಾರದಲಿ ನೀ ಕಂಡ ಆ ಹುಸಿನೋಟ ....
ನನ್ನ ಮನದಲಿ ಎದ್ದ ಬಿರುಗಾಳಿಯ ತೋರಲಿಲ್ಲವೇನು !!!...
ಸಮಾಜದ ಆ ನಿಲುವಿಗೆ ,
ನನ್ನವರ ನಿಕ್ರಷ್ಟ ನೋಟಕೆ ...
ಪ್ರೀತಿಯ ನಿಕಷದಲಿ ಸೋತ
ನನ್ನೀ ಮನದ ರೋದನೆ ಕೇಳುತ್ತಿಲ್ಲವೇನು !!!
ನನ್ನೀ ಮನದ ರೋದನೆ ಕೇಳುತ್ತಿಲ್ಲವೇನು !!!
ಚೂರಾದ ಮನವನು ನಿತ್ಯ ಕಲ್ಲಾಗಿಸಿ ,
ನನಸಾಗದ ಕನಸುಗಳಲಿ ದಿನವೂ ಬೇಯುತಾ ,
ಬದುಕಿನ "ಅರ್ಥ"ಗಳಿಂದ ಓಡುತಿರುವ
ಈ ನನ್ನ ಆರ್ತನಾದ ಅರ್ಥಹೀನವೇನು !!!
ಮಗುವಿನಂತೆ ಮುದ್ದಿಸಿ, ಗೆಳೆತಿಯಂತೆ ಆಧರಿಸಿ ,
ಕರೆಗಳಿಗೆ ಓಗೊಟ್ಟು,ಕನಸುಗಳಲಿ ಜೊತೆಯಾದ
ಆ ನಿರ್ಮಲ-ದಿನಗಳು ಸುಮಧುರವಲ್ಲವೇನು.... ???
ದ್ವಂದ್ವಗಳ ನಡುನೀರಲ್ಲಿ ತೇಲಿಬಿಟ್ಟ ನಂಟು
ಈಗ "ತಾಗ್ಯ"ವಲ್ಲವೇನು!!! .....
ವಿರಹದ ಈ ನೋವಿಗೆ ನೀನೇ ಹೇಳು " ಗೆಳೆಯ"
ಕೊನೆಯೇ ಇಲ್ಲವೇನು?......
-ಪ್ರಜ್ಞಮಾಲಾ
0 comments:
Post a Comment