Tuesday, 24 January 2012

ಮರು-ಪ್ರಶ್ನೆ



ಅಂದು ಆ ನೋಟದಲ್ಲಿ ನನ್ನ ಅಸಹಾಯಕತೆ ಕಾಣಲೇ ಇಲ್ಲವೇನು ? ...
ನಿನ್ನ ಪ್ರತಿ ಕಂಬನಿ-ಹುಸಿ ನಗೆಯಲ್ಲೂ ನನ್ನ ಹತಾಶೆ ಕೂಡಿರಲಿಲ್ಲವೇನು!!!

ದ್ವಾರದಲಿ ನೀ ಕಂಡ ಆ ಹುಸಿನೋಟ ....

ನನ್ನ ಮನದಲಿ ಎದ್ದ ಬಿರುಗಾಳಿಯ ತೋರಲಿಲ್ಲವೇನು !!!...

ಸಮಾಜದ ಆ ನಿಲುವಿಗೆ ,

ನನ್ನವರ ನಿಕ್ರಷ್ಟ ನೋಟಕೆ ...
ಪ್ರೀತಿಯ ನಿಕಷದಲಿ ಸೋತ
ನನ್ನೀ ಮನದ ರೋದನೆ ಕೇಳುತ್ತಿಲ್ಲವೇನು !!!
 


ಚೂರಾದ ಮನವನು ನಿತ್ಯ ಕಲ್ಲಾಗಿಸಿ ,
ನನಸಾಗದ ಕನಸುಗಳಲಿ ದಿನವೂ ಬೇಯುತಾ ,
ಬದುಕಿನ "ಅರ್ಥ"ಗಳಿಂದ ಓಡುತಿರುವ
ಈ ನನ್ನ ಆರ್ತನಾದ   ಅರ್ಥಹೀನವೇನು !!!

ಮಗುವಿನಂತೆ ಮುದ್ದಿಸಿ, ಗೆಳೆತಿಯಂತೆ ಆಧರಿಸಿ ,
ಕರೆಗಳಿಗೆ ಓಗೊಟ್ಟು,ಕನಸುಗಳಲಿ ಜೊತೆಯಾದ
ಆ ನಿರ್ಮಲ-ದಿನಗಳು ಸುಮಧುರವಲ್ಲವೇನು.... ???

ದ್ವಂದ್ವಗಳ ನಡುನೀರಲ್ಲಿ ತೇಲಿಬಿಟ್ಟ ನಂಟು
ಈಗ "ತಾಗ್ಯ"ವಲ್ಲವೇನು!!! .....

ವಿರಹದ ಈ ನೋವಿಗೆ ನೀನೇ ಹೇಳು " ಗೆಳೆಯ"
ಕೊನೆಯೇ ಇಲ್ಲವೇನು?......
                                                       -ಪ್ರಜ್ಞಮಾಲಾ

0 comments:

Post a Comment