ನರಳುತಿಹುದು ಮನ ಕ್ಷಣ-ಕ್ಷಣವೂ ಇಂದು ,
ಹಿಡಿದಿಡಲಿ ಹೇಗೆ ಈ ಕುತೂಹಲವ ಇನ್ನು ?...
ಅಂಜಿಕೆಯ ಬುತ್ತಿಯ ಬೊಗಸೆಯಲಿ ಹಿಡಿದು ,
ವಿಶ್ವಾಸದ ಮುಗುಳ್ನಗೆ ಮೂಡುವುದು ಹೇಗೆ ಇನ್ನು ?...
ಅನುಭವಗಳ ಪುಳಕ ಮನವ ಹಿಗ್ಗಿಸುತಿರೆ,
"ನ"-ಕಾರದ ಛಾಯೆ ಹಿಂಡಲು ಸಜ್ಜಾದಂತಿದೆ ಮನವ ಇನ್ನೊಂದೆಡೆ ...
'ಸೋಲ'ನೇ ಸೋಲಿಸುವ ಛಲ ಮನಕೆ ಸಾಂತ್ವನವ ನೀಡುತಿರೆ,
ಬೆನ್ನೇರಲು ಕಾದಂತಿದೆ ನಿರಾಸೆಯ ರಚ್ಚೆ ಮಗದೊಂದೆಡೆ ...
ಹಿಡಿದಿಡಲಿ ಹೇಗೆ ಈ ಕುತೂಹಲವ ಇನ್ನು ?...
ಅಂಜಿಕೆಯ ಬುತ್ತಿಯ ಬೊಗಸೆಯಲಿ ಹಿಡಿದು ,
ವಿಶ್ವಾಸದ ಮುಗುಳ್ನಗೆ ಮೂಡುವುದು ಹೇಗೆ ಇನ್ನು ?...
ಅನುಭವಗಳ ಪುಳಕ ಮನವ ಹಿಗ್ಗಿಸುತಿರೆ,
"ನ"-ಕಾರದ ಛಾಯೆ ಹಿಂಡಲು ಸಜ್ಜಾದಂತಿದೆ ಮನವ ಇನ್ನೊಂದೆಡೆ ...
'ಸೋಲ'ನೇ ಸೋಲಿಸುವ ಛಲ ಮನಕೆ ಸಾಂತ್ವನವ ನೀಡುತಿರೆ,
ಬೆನ್ನೇರಲು ಕಾದಂತಿದೆ ನಿರಾಸೆಯ ರಚ್ಚೆ ಮಗದೊಂದೆಡೆ ...
"ಸುದೈವ"ವೇ ಬಾ ಅಪ್ಪಿಬಿಡು ನನ್ನ ,
ಈ ಭಾವ-ತುಮುಲದಿಂದ ಬಿಡಿಸು ಒಮ್ಮೆ ,
ನಿರ್ಭಾವುಕ ಅಲೆಗಳೇ ತೇಲಿಬಿಡಿ ನನ್ನ ,
ಕರ್ಣಗಳಲಿ ಗುನುಗಿಸಿ ಹಿತವಾದ ರಾಗವೊಂದ ಹಾಗೆ ಸುಮ್ಮನೆ ...
ಸಾಕೆನಿಸಿದೆ ಈ ಜಂಜಾಟ-ಈ ವೇದನೆ ...
ಬಯಸುತಿದೆ ಮನವು ಎಡಬಿಡದೇ ,
ಸಿಹಿ ತರಲಿ ಈಗ ಬರುವ ಸುದ್ದಿ ,
ಸಿಹಿ ತರಲಿ ಈಗ ಬರುವ ಸುದ್ದಿ ,
ತುಂಬಲಿ ಕಂಗಳಲಿ ಅನನ್ಯ ಕಾಂತಿ...
ಚಿಗುರಲಿ "ಆತ್ಮವಿಶ್ವಾಸ"ದ ಸಂಜೀವಿನಿ ...
ನೆರವೇರಲಿ ಮನದ "ಆಶಯ" ಇಂದೇ ...
ನೆರವೇರಲಿ ಮನದ "ಆಶಯ" ಇಂದೇ ...
-ಪ್ರಜ್ಞಮಾಲಾ
0 comments:
Post a Comment