ಕಾಡುತ್ತಿದ್ದ ದುಸ್ವಪ್ನವಿಂದು ತಾನಾಗೆ ಮರೆಯಾಗಿದೆ ......
ನೆನಪುಗಳ ನಂಟು ಕಳಚುತಿದೆ .....
ನಿರೀಕ್ಷೆಯ ಕಹಿ ಬೇನೆ ಮಾಸಿಸುತಿದೆ ...
ಬಹು ದಿನಗಳಿಂದ ಆಶಿಸಿದ ನಿರ್ಲಿಪ್ತ ಭಾವ
ಇಂದು ತಾನಾಗೆ ಒದಗಿಬಂದಿದೆ ......
ಬತ್ತಿಹೋದ ಈ ಹೃದಯದಲಿ ,
ಅಮೃತ ವರ್ಷಿಣಿಯ ಸಿಂಚನವಾಗಿದೆ
ಸ್ನೇಹದ ಆರೈಕೆಯಲಿ , ಚಿಗುರೊಂದು ತಳಿರೊಡೆಯುತಿದೆ .....
0 comments:
Post a Comment