ಜೊತೆಯಾಗಿ ನಿನಗಿರಲಿ ಶ್ರಮವೆಂಬ ಸೈನ್ಯ
ಬೀಸುವ ಬಿರುಗಾಳಿಯ ಧೈರ್ಯದಲಿ ಸೆಟೆದು,
ಕಡಲ ಅಬ್ಬರದ ಅಲೆಗಳ ಸ್ಥೈರ್ಯದಲಿ ದಾಟಿ ,
ಮುಳ್ಳಿನ ಕಗ್ಗತ್ತಲೆಯ ಹಾದಿಗಳ ಕ್ರಮಿಸಿ
ಏರುವೆ ನೀ ಸಾಧನೆಯ ಶಿಖರದೆತ್ತರವ
"ಜಯ"ವೆಂಬ ಫಲವ , ನವಚೈತನ್ಯವ ಸವಿಯಲು
ಮರೆಯದಿರೆಂದಿಗೂ ಕತ್ತಲೆಯ ಕ್ಷಣಗಳನು ,
ಇರುಳ ತಂಪನು ,
ಸುಧಾಂಶುವಿನ ಆರೈಕೆಯನು ...
ಬಾಳಿನ ಸಾರವು ಇದುವೇ ಸದಾ . . .
-ಪ್ರಜ್ಞಮಾಲಾ
ಈ ಕವಿತೆಯಲ್ಲಿ ಹೊಸತನ ಕಮ್ಮಿ ಆಗಿದೆ. ಶಬ್ಧಗಳಿಗೇ ಒತ್ತು ಕೊಟ್ಟ ಹಾಕಿದೆ...
ReplyDelete@Subramanya Hegde
ReplyDeletehowdu..bhaavanegalannu utprekshisi helalu swalpa shabhadagaLa mele hecchu ottu neediruve