Wednesday 6 July, 2011

"ಅರಿವಿನ ಹೊತ್ತಿಗೆಗಳೇ"

ಬಣ್ಣಿಸಲಿ ಹೇಗೆ ನಿಮ್ಮನು ಓ ಪುಸ್ತಕಗಳೇ ?!?

ಇರುವಿರಿ  ಜೊತೆಯಲಿ  ಜ್ಞಾನವ ತುಂಬುತಾ
ರಕ್ಷೆಯ  ಮಸ್ತಕಕೆ ನೀಡುವಿರಿ
ಜ್ಞಾನದ ಬೆಳಕನು ತುಂಬುತಾ ನೀವು
ಅಜ್ಞಾನದ ಕೊಳಕನು ಅಳಿಸುವಿರಿ

ಪುಟಗಳ ತುಂಬ ಮಾಹಿತಿ ನೀಡಿ
ಮನಸಿನ ದಾಹವ ತಣಿಸುವಿರಿ
ಪೋಷಿಸಿ ಮನವನು, ಸಲಹುತಾ ಸದ್ಗುಣಗಳನು
ಸುಸಂಸ್ಕೃತಿಯ ಅಲೆಯನು ಹರಿಸುವಿರಿ

ದುಃಖದಿ ಬಲವನ್ನು, ಸುಖದಲಿ ಪ್ರಜ್ಞೆಯ
      ನೀಡುತಾ ನೀವು
ಆತ್ಮಕೆ ಬಲವನ್ನು ನೀಡುವಿರಿ

ಮೇಧಾವಿಯ ತತ್ವವ  ಹೊರುತಲಿ ನೀವು
ಅರಿವಿನ ಸೌರಭ  ಹರಿಸುವಿರಿ
ನೀತಿಯ ನುಡಿಗಳ , ಲೋಕದ ಸತ್ಯವ
ಎಲ್ಲರ ಮುಂದೆ ಬಿಚ್ಚುವಿರಿ

ವಿದ್ಯಾದಾನವ ಮಾಡುತಾ ನೀವು
ನಿರಂತರ ಮನದಲಿ ನೆಲೆಸುವಿರಿ
ಚಿರಂತನ ಬೆಳಕನು ಮೂಡಿಸಿ  ನೀವು
ಅನುಭವಗಳ ವಿಸ್ತರಿಸುವಿರಿ

ಯಾರೂ ಕದಿಯದ ಸಂಪತ್ತಾಗಿ
ಭಾಷೆಯ ಕಂಪನು ಸೂಸುವಿರಿ
                                                 -ಪ್ರಜ್ಞಮಾಲಾ

 




 











4 comments:

  1. Nice one....so you created a blog for urself..thats good..Nice to be your 1st follower...wish you all the best...

    ReplyDelete
  2. ಸೂಪರ್ :)
    "ಯಾರೂ ಕದಿಯದ ಸಂಪತ್ತಾಗಿ ಭಾಷೆಯ ಕಂಪನು ಸೂಸುವಿರಿ" ಸಖತ್ತಾಗಿ ಇದ್ದು :)

    ReplyDelete