Monday 11 July, 2011

"ಮೌನರಾಗ " : ಕಷ್ಟಗಳು ಅಸಹನೀಯವಾದಾಗ, ನಮ್ಮವರೇ ನಡುನೀರಿನಲ್ಲಿ ನಮ್ಮನ್ನು ಕೈಬಿಟ್ಟಾಗ , ಇಂದಿನ ಅಸಹಾಯಕತೆಯ ಕತ್ತಲು ನಾಳೆಗಳನ್ನು ಆವರಿಸಿದಾಗ .... ನಮ್ಮ ಆತ್ಮಸಾಕ್ಷಿಯೇ ನಮ್ಮ ಚೇತನವಾದರೆ ......ಮುನ್ನುಗ್ಗಿ , ಮುಂಬರುವ ಅವಕಾಶಗಳಿಗೆ ಕೈಚಾಚಲು ಪ್ರೇರಣೆಯಾದರೆ !!!




ಒಮ್ಮೊಮ್ಮೆ ಅನಿಸುವುದು ಜೀವನ
ದುಸ್ತರ, ದುಃಖಕರ, ನಿಷ್ಪ್ರಯೋಜಕ

ಸ್ವರಗಳೇ ಅಪಸ್ವರವಾಗಿ
ಡೋಲಾಯಮಾನವಾಗುವುದು ಚಿತ್ತ
ರಾರಾಜಿಸುವುದು ನೈಚ್ಯ

ಬಂಧಿಸುವುದು ನೆಮ್ಮದಿಯ
ಸಂಕೋಲೆಯಂತೆ ,
ದಹಿಸುವುದು ಯೋಚನಾಲಹರಿಯ
ಅಗ್ನಿಯ ಶಿಖೆಯಂತೆ

ಜೀವನ ಅರ್ಕ ಅಸ್ತಮಿಸಿ
ಮೌನರಾಗ ಹೊರಹೊಮ್ಮಿ
ಅಂತ್ಯವೇ ಕಾಣುವುದು ನೋಡಿದಲ್ಲೆಲ್ಲಾ

ಆಗಲೇ . . .
ಭಾವಗಳ ಸಂತೈಸುತಾ  ,
ಬೆಳದಿಂಗಳ ಪಸರಿಸುತಾ ,
ಇರುಳ ಮರೆಯಲ್ಲಿ  ಉದಯಿಸುವನು
ಬಾಳ "ಸುಧಾಂಶು" . . .
 
ಬಡಿದೆಬ್ಬಿಸುತಾ ಆತ್ಮಬಲವ,
ಅನುನಯಿಸುವನು ಚಿತ್ತವ

ನಾಳೆಯ ಅರ್ಕನು ತರುವ
ಅಗಮ್ಯ ಅವಕಾಶಗಳ ತೋರುತಾ. . .
ಮೂಡಿಸುವನು ನವೀನ ಆಶಾಕಿರಣ
                                                            -ಪ್ರಜ್ಞಮಾಲಾ

1 comment: