ಬದುಕೊಂದು ಜಟಕಾಬಂಡಿ
ಆರಕ್ಕೇರಿದರೆ,ಮೂರಕ್ಕಿಳಿಯಲೇ ಬೇಕು
ಇದೇ ಬಾಳಿನ ಮುನ್ನುಡಿ ...
ನೆನ್ನೆಯ ದಿನಗಳ ಅನುಭವ ನೆನೆಯುತಾ ,
ಇಂದಿನ ದಿನದ ಪಾಠವ ಸವಿಯುತಾ,
ಮುಂದಿನ ದಿನಗಳ ಆಶೆಯ ಕಾಯುತಾ,
ಜಯದ ಸಿಹಿಯ ಪ್ರಜ್ಞೆಯಲಿ ಮೆರೆಯುತಾ,
ಸೋಲಿನ ಕಹಿಯ ಸ್ಥೈರ್ಯದಿ ಅಳಿಸುತಾ . . .
ಮರೆಯದಿರೆಂದೆಂದೂ . . .
ನೀ ಮಾಡಿದ ಕರ್ಮವ ,
ನೆನಪಿಡು ಎಂದೆಂದೂ
ನಿನದಾದ ಕಾರ್ಯವ. . .
ಬಾಳು ಸಾಗುತಿರೆ ಹೀಗೆ,
ನೀನೇರುವೆ ಸಾಧನೆಯ ಶಿಖರದೆತ್ತರವ
ನಿನ್ನವರ ಹಾರೈಕೆಯಲಿ ಸದಾ :)
ನೆನ್ನೆಯ ದಿನಗಳ ಅನುಭವ ನೆನೆಯುತಾ ,
ಇಂದಿನ ದಿನದ ಪಾಠವ ಸವಿಯುತಾ,
ಮುಂದಿನ ದಿನಗಳ ಆಶೆಯ ಕಾಯುತಾ,
ಜಯದ ಸಿಹಿಯ ಪ್ರಜ್ಞೆಯಲಿ ಮೆರೆಯುತಾ,
ಸೋಲಿನ ಕಹಿಯ ಸ್ಥೈರ್ಯದಿ ಅಳಿಸುತಾ . . .
ಮರೆಯದಿರೆಂದೆಂದೂ . . .
ನೀ ಮಾಡಿದ ಕರ್ಮವ ,
ನೆನಪಿಡು ಎಂದೆಂದೂ
ನಿನದಾದ ಕಾರ್ಯವ. . .
ಬಾಳು ಸಾಗುತಿರೆ ಹೀಗೆ,
ನೀನೇರುವೆ ಸಾಧನೆಯ ಶಿಖರದೆತ್ತರವ
ನಿನ್ನವರ ಹಾರೈಕೆಯಲಿ ಸದಾ :)
-ಪ್ರಜ್ಞಮಾಲಾ. .
0 comments:
Post a Comment